ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಜಿಲ್ಲೆಯ ಕೃಷ್ಣೆ ಹಾಗೂ ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿವೆ. ಕೃಷ್ಣಾ ನದಿ ಹರಿವು ದಿನೇ ದಿನೇ ಅಪಾಯದ ಮುನ್ಸೂಚನೆ ನಿಡುತ್ತಿದೆ. ಈಗಾಗಲೆ ಬಾದಾಮಿ ತಾಲೂಕಿನ ಮಲಪ್ರಭಾ ನದಿಯ ದಡದಲ್ಲಿರುವ ಕೆಲವು ಗ್ರಾಮಗಳು & ಹುನಗುಂದ ತಾಲೂಕಿನ ಕೆಲವು ಗ್ರಾಮಗಳು ಪ್ರವಾಹಕ್ಕೆ ಒಳಪಟ್ಟಿದೆ. ಜಮಖಂಡಿ ತಾಲೂಕಿನ ಶಿರಗುಪ್ಪಿ, ಮುತ್ತೂರ, ಕಂಕಣವಾಡಿ, ಕಡಕೋಳ, ಸನಾಳ, ಆಲಗೂರ, ಶೂರಪಾಲಿ, ತುನಚಿ, ಜಂಬಗಿ ಕೆ.ಡಿ, ಜಂಬಗಿ ಬಿ.ಕೆ, ಹೀರೆಪಡಸಲಗಿ, ನಾಗನೂರ, ಕವಟಗಿ ಇನ್ನೂ ಮುಂತಾದ ಗ್ರಾಮಗಳು ಪ್ರವಾಹಕ್ಕೆ ಒಳಪಟ್ಟಿದೆ.